‘ಲವ್ ಮಾಕ್ಟೇಲ್ 3’ ಕಥೆ ಕದ್ದ ಆರೋಪ: ರಾಘವೇಂದ್ರ ನಾಯಕ್ ಗಂಭೀರ ದೂರಿಗೆ ಡಾರ್ಲಿಂಗ್ ಕೃಷ್ಣ ತಿರುಗೇಟು

mirrortvkannada.com
Date : 24 March 2026, 1:20 pm Posted By : MIRROR TV KANNADA

‘ಲವ್ ಮಾಕ್ಟೇಲ್ 3’ ಕಥೆ ಕದ್ದ ಆರೋಪ: ರಾಘವೇಂದ್ರ ನಾಯಕ್ ಗಂಭೀರ ದೂರಿಗೆ ಡಾರ್ಲಿಂಗ್ ಕೃಷ್ಣ ತಿರುಗೇಟು

'ಲವ್ ಮಾಕ್ಟೇಲ್ 3' ಸಿನಿಮಾ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿರುವ ಬೆನ್ನಲ್ಲೇ, ನಟ ಹಾಗೂ ನಿರ್ದೇಶಕ ಡಾರ್ಲಿಂಗ್ ಕೃಷ್ಣ ವಿರುದ್ಧ ಕೃತಿಚೌರ್ಯದ ಗಂಭೀರ ಆರೋಪ ಕೇಳಿಬಂದಿದೆ. 'ಮಾರಿಗೋಲ್ಡ್' ಚಿತ್ರದ ನಿರ್ದೇಶಕ ರಾಘವೇಂದ್ರ ನಾಯಕ್ ಅವರು ಫೇಸ್‌ಬುಕ್‌ನಲ್ಲಿ ಸುದೀರ್ಘ ಪೋಸ್ಟ್ ಹಾಕುವ ಮೂಲಕ, ಕೃಷ್ಣ ಅವರು ತಮ್ಮ ಕಥೆಯನ್ನು ಕದ್ದು ಈ ಸಿನಿಮಾ ಮಾಡಿದ್ದಾರೆ ಎಂದು ದೂರಿದ್ದಾರೆ. ಸುಮಾರು ಮೂರು ವರ್ಷಗಳ ಹಿಂದೆ ತಾವು ಇದೇ ಕಥೆಯನ್ನು ಕೃಷ್ಣ ಅವರಿಗೆ ವಿವರಿಸಿದ್ದಾಗಿ ಮತ್ತು ಆಗ ಅವರು ತಾವೂ ಇದೇ ರೀತಿಯ ಕಥೆಯಿರುವ ಸಿನಿಮಾ ಮಾಡುತ್ತಿರುವುದಾಗಿ ಹೇಳಿ ತಮ್ಮ ಕಥೆಯನ್ನು ತಿರಸ್ಕರಿಸಿದ್ದರು ಎಂದು ನಾಯಕ್ ತಮ್ಮ ಪೋಸ್ಟ್‌ನಲ್ಲಿ ಹೇಳಿಕೊಂಡಿದ್ದಾರೆ.
ರಾಘವೇಂದ್ರ ನಾಯಕ್ ಅವರ ಪ್ರಕಾರ, 'ಲವ್ ಮಾಕ್ಟೇಲ್ 3' ಚಿತ್ರದ ದ್ವಿತೀಯಾರ್ಧದಲ್ಲಿ ಬರುವ ಮಗುವಿನ ಕಥೆಯ ಎಳೆ ಸಂಪೂರ್ಣವಾಗಿ ಅವರದ್ದೇ ಆಗಿದೆ. ತಮ್ಮ ಮೂಲ ಕಥೆಯಲ್ಲಿ ಗಂಡು ಮಗುವಿನ ಪಾತ್ರವಿದ್ದರೆ, ಸಿನಿಮಾದಲ್ಲಿ ಅದನ್ನು ಹೆಣ್ಣು ಮಗುವಾಗಿ ಬದಲಾಯಿಸಲಾಗಿದೆ; ಇದನ್ನು ಹೊರತುಪಡಿಸಿದರೆ ಕಥೆಯ ಮೂಲ ಆತ್ಮ ಒಂದೇ ಆಗಿದೆ ಎಂಬುದು ಅವರ ಪ್ರಮುಖ ಆರೋಪ. ತಾವು ಈ ವಿಷಯದ ಕುರಿತು ಚರ್ಚಿಸಲು ಮತ್ತು ನ್ಯಾಯ ಕೇಳಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ (KFCC) ಮೆಟ್ಟಿಲೇರಲು ಸಿದ್ಧತೆ ನಡೆಸುತ್ತಿರುವುದಾಗಿಯೂ ಅವರು ಸ್ಪಷ್ಟಪಡಿಸಿದ್ದಾರೆ.
ಈ ಆರೋಪಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಡಾರ್ಲಿಂಗ್ ಕೃಷ್ಣ, ಕೃತಿಚೌರ್ಯದ ಮಾತುಗಳನ್ನು ಸಾರಾಸಗಟಾಗಿ ತಳ್ಳಿಹಾಕಿದ್ದಾರೆ. "ನಾನು, ನನ್ನ ಪತ್ನಿ ಮಿಲನಾ ಮತ್ತು ಯದು ಸೇರಿ ಬರೋಬ್ಬರಿ ನಾಲ್ಕು ವರ್ಷಗಳ ಕಾಲ ಶ್ರಮವಹಿಸಿ ಈ ಚಿತ್ರದ ಕಥೆ ಬರೆದಿದ್ದೇವೆ. ಕಥೆ ಕದ್ದಿದ್ದರೆ ನಮಗೆ ಬರೆಯಲು ಇಷ್ಟೊಂದು ಸಮಯ ಏಕೆ ಬೇಕಿತ್ತು?" ಎಂದು ಅವರು ಪ್ರಶ್ನಿಸಿದ್ದಾರೆ. ಅಲ್ಲದೆ, ನೇರವಾಗಿ ಬಂದು ಮಾತನಾಡದೆ, ಉದ್ದೇಶಪೂರ್ವಕವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಮಾನನಷ್ಟ ಮಾಡುವಂತಹ ಪೋಸ್ಟ್ ಹಾಕಿರುವ ರಾಘವೇಂದ್ರ ನಾಯಕ್ ವಿರುದ್ಧ ಸೂಕ್ತ ಕಾನೂನು ಕ್ರಮ (ಲೀಗಲ್ ಆಕ್ಷನ್) ಜರುಗಿಸುವುದಾಗಿ ಕೃಷ್ಣ ಖಡಕ್ ಎಚ್ಚರಿಕೆ ನೀಡಿದ್ದಾರೆ.

⬇ DOWNLOAD
×

‘ಲವ್ ಮಾಕ್ಟೇಲ್ 3’ ಸಿನಿಮಾ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿರುವ ಬೆನ್ನಲ್ಲೇ, ನಟ ಹಾಗೂ ನಿರ್ದೇಶಕ ಡಾರ್ಲಿಂಗ್ ಕೃಷ್ಣ ವಿರುದ್ಧ ಕೃತಿಚೌರ್ಯದ ಗಂಭೀರ ಆರೋಪ ಕೇಳಿಬಂದಿದೆ. ‘ಮಾರಿಗೋಲ್ಡ್’ ಚಿತ್ರದ ನಿರ್ದೇಶಕ ರಾಘವೇಂದ್ರ ನಾಯಕ್ ಅವರು ಫೇಸ್‌ಬುಕ್‌ನಲ್ಲಿ ಸುದೀರ್ಘ ಪೋಸ್ಟ್ ಹಾಕುವ ಮೂಲಕ, ಕೃಷ್ಣ ಅವರು ತಮ್ಮ ಕಥೆಯನ್ನು ಕದ್ದು ಈ ಸಿನಿಮಾ ಮಾಡಿದ್ದಾರೆ ಎಂದು ದೂರಿದ್ದಾರೆ. ಸುಮಾರು ಮೂರು ವರ್ಷಗಳ ಹಿಂದೆ ತಾವು ಇದೇ ಕಥೆಯನ್ನು ಕೃಷ್ಣ ಅವರಿಗೆ ವಿವರಿಸಿದ್ದಾಗಿ ಮತ್ತು ಆಗ ಅವರು ತಾವೂ ಇದೇ ರೀತಿಯ ಕಥೆಯಿರುವ ಸಿನಿಮಾ ಮಾಡುತ್ತಿರುವುದಾಗಿ ಹೇಳಿ ತಮ್ಮ ಕಥೆಯನ್ನು ತಿರಸ್ಕರಿಸಿದ್ದರು ಎಂದು ನಾಯಕ್ ತಮ್ಮ ಪೋಸ್ಟ್‌ನಲ್ಲಿ ಹೇಳಿಕೊಂಡಿದ್ದಾರೆ.

ರಾಘವೇಂದ್ರ ನಾಯಕ್ ಅವರ ಪ್ರಕಾರ, ‘ಲವ್ ಮಾಕ್ಟೇಲ್ 3’ ಚಿತ್ರದ ದ್ವಿತೀಯಾರ್ಧದಲ್ಲಿ ಬರುವ ಮಗುವಿನ ಕಥೆಯ ಎಳೆ ಸಂಪೂರ್ಣವಾಗಿ ಅವರದ್ದೇ ಆಗಿದೆ. ತಮ್ಮ ಮೂಲ ಕಥೆಯಲ್ಲಿ ಗಂಡು ಮಗುವಿನ ಪಾತ್ರವಿದ್ದರೆ, ಸಿನಿಮಾದಲ್ಲಿ ಅದನ್ನು ಹೆಣ್ಣು ಮಗುವಾಗಿ ಬದಲಾಯಿಸಲಾಗಿದೆ; ಇದನ್ನು ಹೊರತುಪಡಿಸಿದರೆ ಕಥೆಯ ಮೂಲ ಆತ್ಮ ಒಂದೇ ಆಗಿದೆ ಎಂಬುದು ಅವರ ಪ್ರಮುಖ ಆರೋಪ. ತಾವು ಈ ವಿಷಯದ ಕುರಿತು ಚರ್ಚಿಸಲು ಮತ್ತು ನ್ಯಾಯ ಕೇಳಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ (KFCC) ಮೆಟ್ಟಿಲೇರಲು ಸಿದ್ಧತೆ ನಡೆಸುತ್ತಿರುವುದಾಗಿಯೂ ಅವರು ಸ್ಪಷ್ಟಪಡಿಸಿದ್ದಾರೆ.

ಈ ಆರೋಪಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಡಾರ್ಲಿಂಗ್ ಕೃಷ್ಣ, ಕೃತಿಚೌರ್ಯದ ಮಾತುಗಳನ್ನು ಸಾರಾಸಗಟಾಗಿ ತಳ್ಳಿಹಾಕಿದ್ದಾರೆ. “ನಾನು, ನನ್ನ ಪತ್ನಿ ಮಿಲನಾ ಮತ್ತು ಯದು ಸೇರಿ ಬರೋಬ್ಬರಿ ನಾಲ್ಕು ವರ್ಷಗಳ ಕಾಲ ಶ್ರಮವಹಿಸಿ ಈ ಚಿತ್ರದ ಕಥೆ ಬರೆದಿದ್ದೇವೆ. ಕಥೆ ಕದ್ದಿದ್ದರೆ ನಮಗೆ ಬರೆಯಲು ಇಷ್ಟೊಂದು ಸಮಯ ಏಕೆ ಬೇಕಿತ್ತು?” ಎಂದು ಅವರು ಪ್ರಶ್ನಿಸಿದ್ದಾರೆ. ಅಲ್ಲದೆ, ನೇರವಾಗಿ ಬಂದು ಮಾತನಾಡದೆ, ಉದ್ದೇಶಪೂರ್ವಕವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಮಾನನಷ್ಟ ಮಾಡುವಂತಹ ಪೋಸ್ಟ್ ಹಾಕಿರುವ ರಾಘವೇಂದ್ರ ನಾಯಕ್ ವಿರುದ್ಧ ಸೂಕ್ತ ಕಾನೂನು ಕ್ರಮ (ಲೀಗಲ್ ಆಕ್ಷನ್) ಜರುಗಿಸುವುದಾಗಿ ಕೃಷ್ಣ ಖಡಕ್ ಎಚ್ಚರಿಕೆ ನೀಡಿದ್ದಾರೆ.

Editor Reporter
mirrortvkannada.com

‘ಲವ್ ಮಾಕ್ಟೇಲ್ 3’ ಕಥೆ ಕದ್ದ ಆರೋಪ: ರಾಘವೇಂದ್ರ ನಾಯಕ್ ಗಂಭೀರ ದೂರಿಗೆ ಡಾರ್ಲಿಂಗ್ ಕೃಷ್ಣ ತಿರುಗೇಟು

'ಲವ್ ಮಾಕ್ಟೇಲ್ 3' ಸಿನಿಮಾ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿರುವ ಬೆನ್ನಲ್ಲೇ, ನಟ ಹಾಗೂ ನಿರ್ದೇಶಕ ಡಾರ್ಲಿಂಗ್ ಕೃಷ್ಣ ವಿರುದ್ಧ ಕೃತಿಚೌರ್ಯದ ಗಂಭೀರ ಆರೋಪ ಕೇಳಿಬಂದಿದೆ. 'ಮಾರಿಗೋಲ್ಡ್' ಚಿತ್ರದ ನಿರ್ದೇಶಕ ರಾಘವೇಂದ್ರ ನಾಯಕ್ ಅವರು ಫೇಸ್‌ಬುಕ್‌ನಲ್ಲಿ ಸುದೀರ್ಘ ಪೋಸ್ಟ್ ಹಾಕುವ ಮೂಲಕ, ಕೃಷ್ಣ ಅವರು ತಮ್ಮ ಕಥೆಯನ್ನು ಕದ್ದು ಈ ಸಿನಿಮಾ ಮಾಡಿದ್ದಾರೆ ಎಂದು ದೂರಿದ್ದಾರೆ. ಸುಮಾರು ಮೂರು ವರ್ಷಗಳ ಹಿಂದೆ ತಾವು ಇದೇ ಕಥೆಯನ್ನು ಕೃಷ್ಣ ಅವರಿಗೆ ವಿವರಿಸಿದ್ದಾಗಿ ಮತ್ತು ಆಗ ಅವರು ತಾವೂ ಇದೇ ರೀತಿಯ ಕಥೆಯಿರುವ ಸಿನಿಮಾ ಮಾಡುತ್ತಿರುವುದಾಗಿ ಹೇಳಿ ತಮ್ಮ ಕಥೆಯನ್ನು ತಿರಸ್ಕರಿಸಿದ್ದರು ಎಂದು ನಾಯಕ್ ತಮ್ಮ ಪೋಸ್ಟ್‌ನಲ್ಲಿ ಹೇಳಿಕೊಂಡಿದ್ದಾರೆ.
ರಾಘವೇಂದ್ರ ನಾಯಕ್ ಅವರ ಪ್ರಕಾರ, 'ಲವ್ ಮಾಕ್ಟೇಲ್ 3' ಚಿತ್ರದ ದ್ವಿತೀಯಾರ್ಧದಲ್ಲಿ ಬರುವ ಮಗುವಿನ ಕಥೆಯ ಎಳೆ ಸಂಪೂರ್ಣವಾಗಿ ಅವರದ್ದೇ ಆಗಿದೆ. ತಮ್ಮ ಮೂಲ ಕಥೆಯಲ್ಲಿ ಗಂಡು ಮಗುವಿನ ಪಾತ್ರವಿದ್ದರೆ, ಸಿನಿಮಾದಲ್ಲಿ ಅದನ್ನು ಹೆಣ್ಣು ಮಗುವಾಗಿ ಬದಲಾಯಿಸಲಾಗಿದೆ; ಇದನ್ನು ಹೊರತುಪಡಿಸಿದರೆ ಕಥೆಯ ಮೂಲ ಆತ್ಮ ಒಂದೇ ಆಗಿದೆ ಎಂಬುದು ಅವರ ಪ್ರಮುಖ ಆರೋಪ. ತಾವು ಈ ವಿಷಯದ ಕುರಿತು ಚರ್ಚಿಸಲು ಮತ್ತು ನ್ಯಾಯ ಕೇಳಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ (KFCC) ಮೆಟ್ಟಿಲೇರಲು ಸಿದ್ಧತೆ ನಡೆಸುತ್ತಿರುವುದಾಗಿಯೂ ಅವರು ಸ್ಪಷ್ಟಪಡಿಸಿದ್ದಾರೆ.
ಈ ಆರೋಪಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಡಾರ್ಲಿಂಗ್ ಕೃಷ್ಣ, ಕೃತಿಚೌರ್ಯದ ಮಾತುಗಳನ್ನು ಸಾರಾಸಗಟಾಗಿ ತಳ್ಳಿಹಾಕಿದ್ದಾರೆ. "ನಾನು, ನನ್ನ ಪತ್ನಿ ಮಿಲನಾ ಮತ್ತು ಯದು ಸೇರಿ ಬರೋಬ್ಬರಿ ನಾಲ್ಕು ವರ್ಷಗಳ ಕಾಲ ಶ್ರಮವಹಿಸಿ ಈ ಚಿತ್ರದ ಕಥೆ ಬರೆದಿದ್ದೇವೆ. ಕಥೆ ಕದ್ದಿದ್ದರೆ ನಮಗೆ ಬರೆಯಲು ಇಷ್ಟೊಂದು ಸಮಯ ಏಕೆ ಬೇಕಿತ್ತು?" ಎಂದು ಅವರು ಪ್ರಶ್ನಿಸಿದ್ದಾರೆ. ಅಲ್ಲದೆ, ನೇರವಾಗಿ ಬಂದು ಮಾತನಾಡದೆ, ಉದ್ದೇಶಪೂರ್ವಕವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಮಾನನಷ್ಟ ಮಾಡುವಂತಹ ಪೋಸ್ಟ್ ಹಾಕಿರುವ ರಾಘವೇಂದ್ರ ನಾಯಕ್ ವಿರುದ್ಧ ಸೂಕ್ತ ಕಾನೂನು ಕ್ರಮ (ಲೀಗಲ್ ಆಕ್ಷನ್) ಜರುಗಿಸುವುದಾಗಿ ಕೃಷ್ಣ ಖಡಕ್ ಎಚ್ಚರಿಕೆ ನೀಡಿದ್ದಾರೆ.

Share ePaper Clip

Preparing image...

Share

Facebook
Twitter 
WhatsApp
Telegram
Email  

Share

 మరిన్ని వార్తలు

Share :

 నోటిఫికేషన్స్