ನಿರ್ಮಾಪಕರ ವಿರುದ್ಧ ಮಾನನಷ್ಟ ಮೊಕದ್ದಮೆ – ಇಂದು ಕೋರ್ಟ್‌ಗೆ ಹಾಜರಾಗಲಿರುವ ನಟ ಸುದೀಪ್..

ನಿರ್ಮಾಪಕರ ವಿರುದ್ಧ ದಾಖಲಿಸಿದ್ದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ (Defamation Case) ಸಂಬಂಧಿಸಿದಂತೆ ಇಂದು ನಟ ಸುದೀಪ್ ಎಸಿಜೆಎಂ ಕೋರ್ಟ್‌ಗೆ (ACJM) ಹಾಜರಾಗಲಿದ್ದಾರೆ.

 

ಸಿನಿಮಾ ಕಾಲ್‌ಶೀಟ್ ಕೊಡೋದಾಗಿ ಹೇಳಿ ನಟ ಸುದೀಪ್ (Actor Sudeep) 9 ಕೋಟಿ ರೂ. ಪಡೆದಿದ್ದರು ಎಂದು ನಿರ್ಮಾಪಕರು ಆರೋಪಿಸಿದ್ದರು. ಈ ಸಂಬಂಧ 2023ರಲ್ಲಿ 7ನೇ ಎಸಿಜೆಎಂ ನ್ಯಾಯಾಲಯದಲ್ಲಿ ನಿರ್ಮಾಪಕರಾದ ಎಂ.ಎನ್ ಕುಮಾರ್ ಮತ್ತು ಎಂ.ಎನ್ ಸುರೇಶ್ ಅವರ ವಿರುದ್ಧ ಸುದೀಪ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಇದನ್ನೂ ಓದಿ: ಕೋರ್ಟ್‌ ಕಟಕಟೆಯಲ್ಲಿ ಎಂ.ಎನ್‌ ಕುಮಾರ್‌ ವಿರುದ್ಧ ಹೇಳಿಕೆ ನೀಡಿದ ಕಿಚ್ಚ ಸುದೀಪ್‌

 

ಈ ಸಂಬಂಧ ಇಂದು ನಿರ್ಮಾಪಕರ ಪರ ವಕೀಲರು ನಟ ಸುದೀಪ್ ಅವರ ಕ್ರಾಸ್ ಎಕ್ಸಾಮಿನೇಷನ್ ನಡೆಸಲಿದ್ದಾರೆ. ಇದಕ್ಕೂ ಮುನ್ನ ವಿಚಾರಣೆ ನಡೆದಾಗ ಸುದೀಪ್ ಹಾಜರಾಗಿದ್ದರು. ಸದ್ಯ ಪ್ರಕರಣ ಎವಿಡೆನ್ಸ್ ಹಂತದಲ್ಲಿದೆ.

 

Share

Facebook
Twitter 
WhatsApp
Telegram
Email  

Share

 మరిన్ని వార్తలు

Share :

 నోటిఫికేషన్స్