ನೇಪಾಳದಲ್ಲಿ ಬೆಚ್ಚಿಬೀಳಿಸುವ ಘಟನೆ ನಡೆದಿದ್ದು, 14 ವರ್ಷಗಳ ಹಿಂದೆ ಕುಟುಂಬದ ತಂದೆ-ತಾಯಿಯನ್ನು ಕೊಂದಿದ್ದ ಅದೇ ಕಾಡಾನೆ ಮತ್ತೆ ದಾಳಿ ನಡೆಸಿ ಅದೇ ಕುಟುಂಬದ ಇನ್ನಿಬ್ಬರನ್ನು ಬಲಿ ಪಡೆದಿದೆ. ಸುರಕ್ಷತೆಗಾಗಿ ಊರು ಬದಲಿಸಿದ್ದರೂ ಕಾಡಾನೆ ಹುಡುಕಿಕೊಂಡು ಬಂದು ದಾಳಿ ನಡೆಸಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಶನಿಚರ ಬೋಟೆ ಅವರ ಕುಟುಂಬವು ಚಿತ್ವನ್ ರಾಷ್ಟ್ರೀಯ ಉದ್ಯಾನವನದ ಸಮೀಪದ ಮಡಿ ಪಟ್ಟಣದಲ್ಲಿ ವಾಸಿಸುತ್ತಿತ್ತು. 2012ರಲ್ಲಿ ‘ಧುರ್ಬೆ’ ಎಂಬ ಕಾಡಾನೆ ಅವರ ತಂದೆ-ತಾಯಿಯನ್ನು ತುಳಿದು ಕೊಂದಿತ್ತು. ಈ ಘಟನೆಯ ಬಳಿಕ ಕುಟುಂಬದ ಸುರಕ್ಷತೆಗಾಗಿ ಅವರು ಸುಮಾರು 14 ಕಿಲೋಮೀಟರ್ ದೂರದ ಜಗತ್ಪುರ್ ಪ್ರದೇಶಕ್ಕೆ ಸ್ಥಳಾಂತರಗೊಂಡಿದ್ದರು.
ಆದರೆ ಹಲವು ವರ್ಷಗಳ ನಂತರ ಅದೇ ಕಾಡಾನೆ ಜಗತ್ಪುರ್ನಲ್ಲಿರುವ ಅವರ ಮನೆಗೆ ನುಗ್ಗಿ ಶನಿಚರ ಬೋಟೆ ಅವರ 25 ವರ್ಷದ ಸೊಸೆ ಆಶಿಕಾ ಬೋಟೆ ಮತ್ತು ನಾಲ್ಕು ವರ್ಷದ ಮೊಮ್ಮಗ ಭರತ್ ಬೋಟೆಯನ್ನು ತುಳಿದು ಕೊಂದಿದೆ. ಈ ಘಟನೆ ನೇಪಾಳದಲ್ಲಿ ವನ್ಯಜೀವಿ-ಮಾನವ ಸಂಘರ್ಷದ ಬಗ್ಗೆ ಮತ್ತೆ ಆತಂಕವನ್ನು ಹೆಚ್ಚಿಸಿದೆ.









